Monday, December 26, 2011

ಆ...ಲಯದೊಳಗೆ.....

ನಾನು ಹತ್ತು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕ್ರಿಸ್ಮಸ್ ಸಂದರ್ಭದಲ್ಲಿ ಬರೆದ ಪುಟ್ಟ ಕವಿತೆ. ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲಿ ಈ ಕವಿತೆ ಪ್ರಕಟವಾಗಿದೆ.

ನಾದವೊಂದು
ಮಂಜಿನ ಎದೆಯ ಕದ ತೆರೆದು
ಮುಂಜಾವಿನ ಮೊಂಬತ್ತಿ
ತಂದು ಹಚ್ಚಿಟ್ಟ ಹೊತ್ತು

ವೌನಕ್ಕೆ
ತಂದೆಯ ಗತ್ತು!

ಅದುರುವ ಚಿಗುರೆಲೆಯ ಮೇಲೆ
ಒಂದೇ ಒಂದು ಹನಿ
ಕಣ್ಣೆವೆಯ ತೊಟ್ಟು
ಕಳಚಿ ಬಿದ್ದ ಕಂಬನಿ!

ನಿನ್ನೆಯ ಸಂಜೆ
ಹರೆಯಕ್ಕೆ ಲಜ್ಜೆಯ ಬಣ್ಣ
ಬಳಿದ ಹುಡುಗಿ
ತಾಯಿ ಹೆಜ್ಜೆಯಲ್ಲಿ
ಇನ್ನಿಲ್ಲದಂತೆ...

ಲಯದೊಳಗೆ ಕರಗಿ...

ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂವುಗಳು!

1 comment: