Thursday, March 20, 2014

ಬರೇ ಪದಗಳು ಅಷ್ಟೇ...

1
ಮನಸ್ಸು ಬೆಣ್ಣೆಯಂತೆ
ಎಂದು ಹೇಳುತ್ತಾರೆ...
ಒಂದು ಬೆಣ್ಣೆಯ ಮುದ್ದೆ ಕರಗೂದನ್ನು ನೋಡಿ
ಇನ್ನೊಂದು ಬೆಣ್ಣೆ ಕರಗುತ್ತದೆಯೇ?
2
ಹೊಟೇಲೊಂದರಲ್ಲಿ
ದಲಿತನೂ ಬ್ರಾಹ್ಮಣನೂ
ಎದುರು ಬದುರು ಕೂತು
ಒಂದೇ ಮಡಕೆಯಲ್ಲಿ ಬೆಂದ
ಅನ್ನವನ್ನು ಉಣ್ಣುತ್ತಿದ್ದಾರೆ !
ಇತ್ತೀಚಿಗೆ ಮಠ, ದೇವಸ್ತಾನಗಳನ್ನು
ತೊರೆದು ದೇವರು ಯಾಕೆ
ಹೊಟೇಲುಗಳಲ್ಲಿ ಕಾಲ ಕಳೆಯುತ್ತಿದ್ದಾನೆ
ಎನ್ನೋದು ಈಗ ಗೊತ್ತಾಯಿತು
3
ಮಾವಿನ ಹಣ್ಣನ್ನು
ಮುಚ್ಚಿಡಬಹುದು
ಹಣ್ಣಿನ ಪರಿಮಳವ
ಏನು ಮಾಡಲಿ!?
4
ಒಂದು ಪುಟಾಣಿ ಇರುವೆ
ಬಂದ ಕೆಲಸ ಮುಗಿಸಿ
ಎದುರಾದ ಎಲ್ಲ ಅಡೆತಡೆ ದಾಟಿ
ಹೇಗೋ ಮನೆ ಮುಟ್ಟುವಷ್ಟರಲ್ಲಿ
ಹಣ್ಣು ಹಣ್ಣು
ಮುದಿಯಾಗಿತ್ತು
5
ವಿಜ್ಞಾನ ಟಿವಿಯನ್ನು
ಕಂಡು ಹಿಡಿಯಿತು
ಆ ಟಿವಿಯನ್ನು ಮನೆಯ ಯಾವ
ಮೂಲೆಯಲ್ಲಿ ಇಡಬೇಕು
ಎನ್ನೋದಕ್ಕೆ ಜೋತಿಷಿಯನ್ನು
ಕರೆಯಲಾಯಿತು

No comments:

Post a Comment