Monday, September 8, 2014

ಹೊಳೆದದ್ದು ಹೊಳೆದಂತೆ-೧

ದೇವರ ಇರವು ಸ್ಪಷ್ಟ ಗೊಳ್ಳುತ್ತಾ ಹೋಗೋದು ಯಾವುದೇ ಧರ್ಮಗುರು ಅಥವಾ ಧರ್ಮ ಗ್ರಂಥಗಳಿನ್ದಲ್ಲ. ನಮ್ಮ ನಮ್ಮ ಬದುಕಿನ ಅನುಭವಗಳೇ ಅವನ ಇರವಿನ ಎಡೆಗೆ, ಅವನ ಅರಿವಿನ ಎಡೆಗೆ ನಮ್ಮನ್ನು ತಲುಪಿಸುತ್ತದೆ. ಈ ಕಾರಣದಿಂದಲೇ ದೇವರ ಅನುಭವ ಜನರಿಂದ ಜನರಿಗೆ ಭಿನ್ನವಾಗಿರುತ್ತದೆ. ನಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಸುಖ, ಸಂಕಟ ಗಳಲ್ಲೂ ಕೆಲವು ಸಂಕೇತಗಳು, ಸೂಚನೆಗಳು ಇರುತ್ತವೆ. ಕಿವಿ, ಕಣ್ಣು, ಮೂಗು, ಹೃದಯ ತೆರೆದು ಅದನ್ನು ಆಲಿಸುವ ಸಹನೆ, ವಿನಯ ನಮ್ಮಲ್ಲಿದ್ದರೆ ಆ ಭಾಷೆ ನಮಗೆ ನಿಧಾನಕ್ಕೆ ಅರ್ಥವಾಗ ತೊಡಗುತ್ತದೆ.

No comments:

Post a Comment