Tuesday, September 1, 2015

ಸಾದತ್ ಹಸನ್ ಮಂಟೋ ಅವರ ಒಂದಿಷ್ಟು ಅಪ್ರಕಟಿತ ಕತೆಗಳು ...

1
ಎಪಿಜೆ ಕಲಾಮ್ ಗೆ
ಬಜರಂಗ ದಳದ ಶೃದ್ಧಾಂಜಲಿ 

---ಮಂಗಳೂರಿನ ಬೀದಿಯಲ್ಲಿ ಹೀಗೊಂದು ಬ್ಯಾನರು 

2

ಗಾಂಧೀ ನೆಲವಾಗಿರುವ ಗುಜರಾತ್ ನಲ್ಲಿ ಹಿಂಸೆ ಸಲ್ಲ. --------ಪ್ರಧಾನಿ ಮೋದಿಯಿಂದ ಹಾರ್ದಿಕ್ ಪಟೇಲ್ ಗೆ ಕರೆ 

3

ನಾನು ಮುಂದಿನ ಸರ್ದಾರ್ ಪಟೇಲ್ ............. ಹಾರ್ದಿಕ್ ಪಟೇಲ್ 

4

ಅವರೆಲ್ಲ ನಾಯಿಯಂತೆ ಸತ್ತರು. ಇನ್ನು ಮುಂದಿನ ಸರದಿ ಪ್ರೊ. ಭಗವಾನ್ ನದ್ದು .......... ಹೀಗಂದ ಉಗ್ರನಿಗೆ ಬಂಧಿಸಿದ ದಿನವೇ ಜಾಮೀನು 

5

ಅಂಬೇಡ್ಕರ್ ಯುವಕ ಸಂಘದಿಂದ ಸತ್ಯ ನಾರಾಯಣ ಪೂಜೆ 

6

ಸಲ್ಲೇಖನ ನಿಷೇಧಕ್ಕೆ ತಡೆ-ಸುಪ್ರಿಂ ಕೋರ್ಟ್ ನಿಂದ ಜೈನ ಧರ್ಮೀಯ ವೃದ್ಧರಿಗೆ ಕೊಡುಗೆ 

7

ಬುರ್ಖಾ ಮಹಿಳೆಯರ ಹಕ್ಕು - ಪಿಎಫ್ಐ ಮುಖಂಡ 

8

ಮತಾಂತರಗೊಂಡ ದಲಿತ ಪಾದ್ರಿಯ ಹೂಳುದಕ್ಕೆ ಕ್ರೈಸ್ತ ಸ್ಮಶಾನದಲ್ಲಿ ಆಕ್ಷೇಪ-ಸುದ್ದಿ 

9

ವಿದ್ವಾಂಸ ಕಲಬುರ್ಗಿ ಕೊಲೆ ವಿಷಾದನೀಯ-ನಟನ ಮಗಳ ಅದ್ದೂರಿ ಮದುವೆಯಲ್ಲಿ ಭಾಗವಹಿಸಿ ಟಿವಿ ವಾಹಿನಿಯೊಂದಿಗೆ ದುಃಖ ಹಂಚಿಕೊಂಡ ಮುಖ್ಯಮಂತ್ರಿ 

10

ಸ್ಮಶಾನದ ಕೊರತೆ - ಬಡ ದಲಿತರಿಂದ ಮುಖ್ಯಮಂತ್ರಿಗೆ ಮನವಿ

11

ಇಂದು ರಾಘವೇಶ್ವರ ಶ್ರೀ ಅವರಿಂದ ಪಾತಿವ್ರತ್ಯ ಕುರಿತು ಉಪನ್ಯಾಸ-ವರದಿ
12
ಅವನು ಗೊತ್ತಿದ್ದು ಮಾಡಿದ ಕೊಲೆಯಲ್ಲ ಅದು. ಅನ್ಯ ಕೋಮಿನವ ಎಂದು ತಪ್ಪು ಗ್ರಹಿಕೆಯಿಂದ ಮಾಡಿದ ಕೊಲೆ ಅಷ್ಟೇ.

No comments:

Post a Comment